Slide
Slide
Slide
previous arrow
next arrow

ಕ್ರೀಡಾಕೂಟ: ಶ್ರೀನಿಕೇತನ ವಿದ್ಯಾರ್ಥಿಗಳ ಸಾಧನೆ

300x250 AD

ಶಿರಸಿ: ಇಲ್ಲಿನ ರೋಟರಿ ಕ್ಲಬ್‌ನ ಆಶ್ರಯದಲ್ಲಿ ಇತ್ತೀಚಿಗೆ ಧಾರವಾಡ ಜಿಲ್ಲೆಯ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಶ್ರೀನಿಕೇತನ ಸಿ.ಬಿ.ಎಸ್.ಇ. ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಸಾಧನೆ ಗೈದಿದ್ದಾರೆ.

ದೈಹಿಕ ಶಿಕ್ಷಕರ ಮಾರ್ಗದರ್ಶನದಿಂದ ಭಾರ್ಗವ್ ಭಟ್ ಹಾಗೂ ಶ್ರೀರಾಮ್ ಭಟ್ ಬ್ಯಾಡ್‌ಮಿಂಟನ್ ಡಬಲ್ಸ್ನಲ್ಲಿ ದ್ವಿತೀಯ ಸ್ಥಾನ ಮತ್ತು ಸಿಂಗಲ್ಸ್ನಲ್ಲಿ ಶ್ರೀರಾಮ್ ಭಟ್ ತೃತೀಯ ಸ್ಥಾನವನ್ನು, ಬಾಲಕರ ರಿಲೇ ವಿಭಾಗದಲ್ಲಿ ಹರ್ಷಿತ್, ವಿರಾಜ, ಸುಯೋಗ ಮತ್ತು ಮಯೂರ್ ತೃತೀಯ ಸ್ಥಾನವನ್ನು ಹಾಗೂ ಬಾಲಕೀಯರ ರಿಲೇ ವಿಭಾಗದಲ್ಲಿ ಶ್ರಾವಣಿ, ಸಂಧ್ಯಾ, ದಿಯಾ, ಸೇಜಲ್ ಮತ್ತು ನೇಹಾ ತೃತೀಯ ಸ್ಥಾನವನ್ನು, ಬಾಲಕರ ಖೋ-ಖೋದಲ್ಲಿ ನಾಯಕರಾದ ಬಸವರಾಜ ಡಿ. ಹಾಗೂ ಅವರ ತಂಡವು ದ್ವಿತೀಯ ಸ್ಥಾನವನ್ನು ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಶಾಲೆಯ ಪ್ರಾಂಶುಪಾಲರು, ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಮಕ್ಕಳ ಈ ಸಾಧನೆಯನ್ನು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top